ಅಭಿವೃದ್ಧಿಯಿಂದ ವಂಚಿತವಾದ ಹದಿನೈದು ಗೊಲ್ಲರಹಟ್ಟಿಗಳನ್ನು ಒಟ್ಟೊಟ್ಟಿಗೆ ಅಭಿವೃದ್ಧಿ ಪಡಿಸಲಾಗುವುದು – ಶಾಸಕ ಡಾ. ಶ್ರೀನಿವಾಸ್. ಎನ್. ಟಿ.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ದೊಡ್ಡ ಗೊಲ್ಲರಹಟ್ಟಿ ಗ್ರಾಮದಲ್ಲಿ 2023-24 ನೇ ಸಾಲಿನ ಕೆ. ಕೆ. ಆರ್.ಡಿ. ಬಿ. ಯೋಜನೆ ಅಡಿಯಲ್ಲಿ ಸಿ. ಸಿ. ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕಾಗಿ ಭೂಮಿಪೂಜೆಯನ್ನು ದಿ. 31-07-24 ರಂದು ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ನೆರವೇರಿಸಿದ ಬಳಿಕ ಮಾತನಾಡಿದರು. ನಮ್ಮ ಕೂಡ್ಲಿಗಿ ಕ್ಷೇತ್ರದಲ್ಲಿ ಪ್ರತಿ ಹಳ್ಳಿ – ಹಟ್ಟಿಗಳಿಗೆ ಅಭಿವೃದ್ಧಿ ಮಾಡುವ ಯೋಗ ಒಟ್ಟಿಗೆ ಬಂದಿದೆ ಎಂದೂ ಹೇಳಿದರು. ದೊಡ್ಡ ಗೊಲ್ಲರಹಟ್ಟಿಯ ಕುಂದುಕೊರತೆಗಳನ್ನು ಆಲಿಸಲು ಶಾಸಕರು ತಮ್ಮ ಜೊತೆಯಲ್ಲಿ ಅಧಿಕಾರಿಗಳು, ಸ್ಥಳೀಯ ಮುಖಂಡರು, ಕಾಡು ಗೊಲ್ಲಸಮುದಾಯದ ಹಿರಿಯರು, ಮಹಿಳೆಯರು, ಯುವಕರೊಂದಿಗೆ ಇಡೀ ಊರು ಸುತ್ತಿ ಅಭಿವೃದ್ಧಿಯಿಂದ ವಂಚಿತವಾಗಿರುವುದನ್ನು ಪರಿಶೀಲಿಸಿದರು. ಊರಿನ ರಸ್ತೆಯ ಮಧ್ಯೆ ಮಳೆ ನೀರಿನಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಿರುವುದರಿಂದ ಅದನ್ನು ತಪ್ಪಿಸಲು ತತ್ ಕ್ಷಣ ನಿಂತ ಸ್ಥಳದಲ್ಲಿಯೇ ಅಧಿಕಾರಿಗಳು ಮತ್ತು ಮುಖಂಡರೊಂದಿಗೆ ಶಾಸಕರು ಚರ್ಚಿಸಿ ಹೊಸರಸ್ತೆಯನ್ನು ಕಲ್ಪಿಸಿಕೊಡಲು ರಸ್ತೆಯ ಭೂಮಿ ಪೂಜೆ ನೆರವೇರಿಸಿ ಮುಂದಿನ ದಿನಗಳಲ್ಲಿ ಅಭಿವೃದ್ಧಿಯಿಂದ ಹಿಂದುಳಿದಿರುವ ಹದಿನೈದು ಗೊಲ್ಲರಹಟ್ಟಿಗಳನ್ನು ಒಟ್ಟೊಟ್ಟಿಗೆ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಊರಿನ ಮುಖಂಡರು ಮತ್ತು ಕಾವಲಿ ಶಿವಪ್ಪ ನಾಯಕ ಬಡೇಲಡ ಕು ಸತೀಶ್ ಇನ್ನು ಅನೇಕ ಮುಖಂಡರು ಹಾಜರಿದ್ದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030