ಹಳ್ಳಿಗಳ ಬಹುದಿನದ ರಸ್ತೆಗಳ ಬೇಡಿಕೆಯ ಭೂಮಿಪೂಜೆಯನ್ನು ನೆರವೇರಿಸಿದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ.
“ಇಡೀ ಜಗತ್ತು ಪುಟ್ಟ ಹಳ್ಳಿ ಎನ್ನುವ ಕಡೆ ಸಾಗುತ್ತದೆ” -ಪುಣ್ಯಕೋಟಿ.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಬೆಳ್ಳಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2023-24 ನೇ ಸಾಲಿನ ಕೆ.ಕೆ. ಆರ್. ಡಿ. ಬಿ. ಯೋಜನೆ ಅಡಿಯಲ್ಲಿ “ಬೆಳ್ಳಘಟ್ಟ – ಗಂಡಬೊಮ್ಮನಹಳ್ಳಿ, ಬೆಳ್ಳಘಟ್ಟ- ಸಿಡೇಗಲ್ಲು, ಸಿಡೇಗಲ್ಲು – ಅರ್ಜುನ ಚಿನ್ನೇನಹಳ್ಳಿ ಗ್ರಾಮಗಳ ಬಹುದಿನಗಳ ಬೇಡಿಕೆಯಾದ ರಸ್ತೆಗಳ ಅಭಿವೃದ್ಧಿ ಮತ್ತು ಡಾಂಬರೀಕರಣದ ಭೂಮಿಪೂಜೆಯನ್ನು ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಬೆಳ್ಳಘಟ್ಟ ಮತ್ತು ಸಿಡೇಗಲ್ಲು ಗ್ರಾಮಗಳಲ್ಲಿ ದಿನಾಂಕ 30-07-24 ರಂದು ನೆರವೇರಿಸಿ ಮಾತನಾಡಿದರು. ಹಳ್ಳಿಗಳು ಹಳ್ಳಿಗಳಾಗಿ ಉಳಿಯಬೇಕು ಅನ್ನುವುದು ಏನೂ ಇಲ್ಲಾ. ಇಡೀ ವಿಶ್ವವೇ ಪುಟ್ಟ ಹಳ್ಳಿ ಎನ್ನುವ ದಿಕ್ಕಿನ ಎಡೆಗೆ ಸಾಗುತ್ತದೆ. ಸಮಾಜ ಸುಧಾರಣೆಗಾಗಿ ಸರ್ಕಾರದ ಮಟ್ಟದಲ್ಲಿ ನಾನು ಪ್ರಯತ್ನಿಸಿ ಅಭಿವೃದ್ಧಿಗೆ ಪಣ ತೊಟ್ಟಿರುವೆ ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು – ಸದಸ್ಯರು, ಮುಖಂಡರು, ಅಧಿಕಾರಿಗಳು, ಗುತ್ತಿಗೆದಾರರು , ಸಾರ್ವಜನಿಕರು ಉಪಸ್ಥಿತರಿದ್ದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030