ಉತ್ತಮ ಸಮಾಜದ ಸಂಕಲ್ಪಕ್ಕಾಗಿ ಪಣ ತೊಟ್ಟ ಶಾಸಕ – ಡಾ. ಶ್ರೀನಿವಾಸ್. ಎನ್.ಟಿ.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮೇಗಳ ಕರ್ನಾರಹಟ್ಟಿ , ಸಿದ್ದಾಪುರ- ವಡ್ಡರಹಟ್ಟಿ, ಗ್ರಾಮಗಳಿಗೆ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ. 12-07-24 ರಂದು ಭೇಟಿ ನೀಡಿ ಊರಿನ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರ ಸಮಸ್ತರ ಸಮ್ಮುಖದಲ್ಲಿ ಕ್ರಮವಾಗಿ ಗುಣಮಟ್ಟದ ಶಾಲಾ ಕಟ್ಟಡ ಹಾಗೂ ಸಿ. ಸಿ. ರಸ್ತೆಯ ಭೂಮಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು. ಇದೇ ವೇಳೆ ಶಾಸಕರು ಗುತ್ತಿಗೆದಾರರನ್ನು ಉದ್ದೇಶಿಸಿ ಮಾತನಾಡಿ, ಯೋಜನಾ ಬದ್ಧ, ಸುಸಜ್ಜಿತವಾದ ಮತ್ತು ಗುಣಮಟ್ಟದ ರೀತಿಯಲ್ಲಿ ತಮ್ಮ ತಮ್ಮ ಕಾಮಗಾರಿಗಳನ್ನು ಪ್ರಾರಂಭಿಸಬೇಕು ಎಂದೂ ತಿಳಿಸಿದರು. ಹಾಗೆಯೇ ಶಾಸಕರು ಆಯಾ ಊರಿನ ಶಾಲೆಗಳಿಗೆ ಭೇಟಿ ನೀಡಿ ಬಿಸಿಯೂಟವನ್ನು ಪರಿಶೀಲಿಸಿದಾಗ ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದಲ್ಲಿ ಆಹಾರ ಪೂರೈಸುತ್ತಿರುವುದು ತಮ್ಮ ಗಮನಕ್ಕೆ ಬಂದ ತಕ್ಷಣ ಸ್ಥಳದಲ್ಲೇ ಕ್ಷೇತ್ರದ ಶಿಕ್ಷಣ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ಊರಿನ ಕುಂದುಕೊರತೆಗಳನ್ನು ಪಟ್ಟಿಮಾಡಿಕೊಂಡು ಬಗೆಹರಿಸುವುದಾಗಿ ಹೇಳಿದರು. ಶಿಥಿಲೀಕರಣಗೊಂಡ ಹಳೇ ಶಾಲಾ ಕಟ್ಟಡ, ಶೌಚಾಲಯ ತೆರವುಗೊಳಿಸಿ ಇರುವ ಸ್ಥಳವನ್ನು ಅಚ್ಚುಕಟ್ಟಾಗಿ ಬಳಸಿಕೊಂಡು ಹೊಸದಾಗಿ ಕಟ್ಟಡ ನಿರ್ಮಿಸಬೇಕು ಎಂದೂ ಸ್ಥಳೀಯ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು. ಸಿದ್ದಾಪುರದಲ್ಲಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಯೋಗ ಕ್ಷೇಮ ವಿಚಾರಿಸಿದರು...
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030