ಕೂಡ್ಲಿಗಿ:ಮೊಹರಾಮ್ ಶಾಂತಿ ಸಭೆ_ಸೌಹಾರ್ದತೆ ಕಾಪಾಡಬೇಕು-DYSP ಮಲ್ಲೇಶಪ್ಪ- ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಲ್ಲಿ, ಮೊಹರಾಮ್ ಹಬ್ಬ ಆಚರಿದಲಾಗುತ್ತಿದ್ದು. ಈ ಸಂದರ್ಭದಲ್ಲಿ ಎಲ್ಲಾ ಕೋಮಿನವರು ಪರಸ್ಪರ ಸೌಹಾರ್ದತೆ ಶಾಂತಿ ಯಿಂದ ವರ್ತಿಸಬೇಕು, ಈ ಮೂಲಕ ಹಬ್ಬವನ್ನು ಬಹು ಅರ್ಥಪೂರ್ಣವಾಗಿ ಧಾರ್ಮಿಕ ನೆಲೆಗಟ್ಟಿನಲ್ಲಿ ಆಚರಿಸಬೇಕು ಎಂದು DYSP ಮಲ್ಲೇಶಪ್ಪ ವಿ ಮಲ್ಲಾಪುರ ಕರೆ ನೀಡಿದರು. ಅವರು ಮೊಹರಾಮ್ ಶಾಂತಿ ಸಭೆಯಲ್ಲಿ ಮಾತನಾಡಿ, ಎಲ್ಲಾ ಕೋಮುಗಳ ಮುಖಂಡರು ಜನಪ್ರತಿ ನಿಧಿಗಳು ತಮ್ಮ ತಮ್ಮ ಯುವಕರಿಗೆ ಹಾಗೂ ಮಕ್ಕಳಿಗೆ, ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸುವಂತೆ ತಿಳಿ ಹೇಳಬೇಕಿದೆ. ಶಾಂತಿ ಭಂಗ ಕಾನೂನುಸುವ್ಯವಸ್ಥೆಗೆ ಧಕ್ಕೆ ಬಂದಲ್ಲಿ, ತಪ್ಪಿತಸ್ಥರ ವಿರುದ್ಧ ಕಾನುನು ರೀತ್ಯ ಶಿಸ್ಥು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದರು. ಹಬ್ಬ ಸಂಭ್ರಮಕ್ಕೆ ಅಚರಿಸುತಲಿದ್ದು ಸೌಹಾರ್ಧತೆ ಕಾಪಾಡಿ, ಧಾರ್ಮಿಕ ಸಂಪ್ರದಾಯಿಕ ಕಾರ್ಯಕ್ರಮಗಳನ್ನು ಶಾಂತಿ ಸುವ್ಯವಸ್ಥಿತೆಯಿಂದ ಆಚರಿಸಬೇಕಿದೆ. ಹಬ್ಬದ ನೆಪದಲ್ಲಿ ಗುಂಪು ಘರ್ಷಣೆ ಕೋಮು ಗಲಭೆಗಳಂತಹ ಕಾನೂನು ಭಾಹಿರ ಚಟುವಟಿಕೆಗಳು, ಜರುಗದಂತೆ ಕಟ್ಟೆಚ್ಚರ ವಹಿಸಿದ್ದು ಅಂತಹ ಘಟನೆಯಲ್ಲಿ ಭಾಗಿಯಾಗ ದಂತೆ ಪಾಲಕರು ಜಾಗ್ರತೆ ವಹಿಸಿ ಎಂದು ಹೇಳಿದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030