ಕ್ಯಾಸನಕೆರೆ ಗೊಲ್ಲರಹಟ್ಟಿ ಶಾಲಾ ವಿದ್ಯಾರ್ಥಿನಿ ರಸ್ತೆ ಅಪಘಾತದಲ್ಲಿ ನಿಧನ ; ದುಃಖದಲ್ಲಿರುವ ಕುಟುಂಬಕ್ಕೆ ಸಾಂತ್ವಾನ ಹೇಳಿದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಕ್ಯಾಸನಕೆರೆ- ಗೊಲ್ಲರಹಟ್ಟಿ ಗ್ರಾಮದ ಶಾಲಾ ವಿದ್ಯಾರ್ಥಿನಿ ಶ್ವೇತಾ (9)ತಂದೆ ರಾಜ ಅವರು ದಿ. 28-06-24 ರಂದು ರಾಷ್ಟ್ರೀಯ ಹೆದ್ದಾರಿ – 50 ರ ಕ್ರಾಸ್ ಬಳಿ ತನ್ನ ತಾಯಿ ಮಾಲಾವತಿಯನ್ನು ಹಿಂಬಾಲಿಸಿ ಹೊಲಕ್ಕೆ ಹೋಗುವ ವೇಳೆ ರಸ್ತೆ ಅಪಘಾತದಲ್ಲಿ ನಿಧನರಾದರು. ಮಾನ್ಯಶಾಸಕರಾದ ಡಾ. ಶ್ರೀನಿವಾಸ್ .ಎನ್. ಟಿ. ಅವರಿಗೆ ಸುದ್ದಿ ಮುಟ್ಟಿದ ನಂತರ ತನ್ನ ಆಪ್ತಬಳಗಕ್ಕೆ ಸೂಚಿಸಿದರು. ಡಾ. ಶ್ರೀನಿವಾಸ್.ಎನ್.ಟಿ. ಆಪ್ತಬಳಗ ದಿಂದ ಬಸವರಾಜ ಗೌಡ್ರು ಹಾಗೂ ಮಾರಪ್ಪ ನರಸಿಂಹಗಿರಿ ಅವರು ದುಃಖದಲ್ಲಿರುವ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳಿ ಆರ್ಥಿಕ ನೆರವು ನೀಡಿದರು. ಈ ಸಂದರ್ಭದಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು…
ವರದಿ. ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030