ಈ ದಿನ 27-05-2024 ರಂದು ಪಂಚಮಸಾಲಿ ಸಮುದಾಯ ಭವನದಲ್ಲಿ ನಡೆದ
ಮಹಿಳಾ ರೈತರ ಉದ್ಯಮಶೀಲತೆ ಕುರಿತು ಸಾವಯವ ರೈತರ ಪ್ರಯೋಗ ಪರಿವಾರ ಸಭೆ ಮಾಡಲಾಯಿತು
ಸಭೆಯಲ್ಲಿ ಮುಖ್ಯವಾಗಿ
ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು
1.ಬೇವಿನ ಬೀಜದಿಂದ ಬೇವಿನ ಹಿಂಡಿ ಮಾಡುವ
2. ಹೊಲದಲ್ಲಿ ಬೆಳೆಯುವ ಅಕ್ಕಡಿ ಮಿಶ್ರ ಬೆಳೆ ಬೀಜಗಳನ್ನ ಬೀಜೋತ್ಪಾದನೆ ಮಾಡಿ ಬೀಜಗಳ ಮಾರಾಟ ಕೂಡ ಮಾಡಬಹುದು, ತರಕಾರಿ ಮತ್ತು ಹೊಲದ ಬೆಳೆಗಳ ಬೀಜಗಳನ್ನು
3. ಶೇಂಗಾ ಎಣ್ಣೆ ಗಾಣದ ಯೂನಿಟ್
4. ಗೋ ಉತ್ಪನ್ನಗಳ ತಯಾರಿಕೆ
5. ತರಕಾರಿ ಬೆಳೆಗಳ ಉತ್ಪಾದನೆ ಮತ್ತು ಮಾರಾಟ
ಈ ಎಲ್ಲಾ ಉದ್ಯಮಗಳನ್ನು ಮಹಿಳೆಯರು ತಮ್ಮ ಆಸಕ್ತಿ ಅನು ಗುಣವಾಗಿ ತಮ್ಮ ತಮ್ಮ ಸಂಘಗಳಲ್ಲಿ ಚರ್ಚಿಸಿ, ಆರ್ಥಿಕವಾಗಿ ಸಬಲೀಕರಣಗೊಳ್ಳಲು, ಸಾವಯವ ಪ್ರಯೋಗ ಪರಿವಾರದ ಸಭೆಯಲ್ಲಿ, ಪರಸ್ಪರ ರೈತರು ರೈತರು ಚರ್ಚಿಸಿ ದರು ಮತ್ತು ತೀರ್ಮಾನಿಸಿದರು.
ಮಹಿಳಾ ರೈತರ ಒಕ್ಕೂಟ ರಚನೆ ಮಾಡುವ ಕುರಿತು, ಮಹಿಳಾ ರೈತರ ಸಮಾವೇಶದ ಕುರಿತು ಮಾತುಕತೆ ಮಾಡಲಾಯಿತು.ಈ ಒಂದು ಸಂದರ್ಭದಲ್ಲಿ ಸುಮಾರು 15 ಹಳ್ಳಿಯಿಂದ 100 ಕ್ಕೂ ಹೆಚ್ಚು ಮಹಿಳಾ ರೈತರು ಭಾಗವಹಿದ್ದರು.
ನಿರ್ವಹಣೆ :- ಕೆ ಮಂಜುನಾಥ ಕೊಟ್ರೇಶಿ ಕೋಟೆಗೌಡ, ಬಸವರಾಜ, ಗೀತಮ್ಮ ಚಂದ್ರಮ್ಮ ಅಶ್ವಿನಿ ಶಿಲ್ಪ, ಶಾರದಮ್ಮ ಕೆಂಚಮ್ಮ ಭಾಗವಹಿಸಿದ್ದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030