ಕಾನಹೊಸಹಳ್ಳಿ: ಕಾರುಡಿಕ್ಕಿ ಪಾದಾಚಾರಿ ಸಾವು
ಹೊಸಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಮಧ್ಯರಾತ್ರಿ ಡಾಬವೊಂದರಲ್ಲಿ ಊಟಕ್ಕೆ ರಸ್ತೆ ದಾಟುತ್ತಿದ್ದ ಪಾದಾಚಾರಿಗೆ ಕಾರು ಡಿಕ್ಕಿಹೊಡೆದಿದ್ದುತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತ ಪಟ್ಟಿದ್ದಾರೆ ತಾಲೂಕಿನ ಮಾಳೆಹಳ್ಳಿಯ ಗ್ರಾಮದ ಬಸವರಾಜ್(ಮೂಕಪ್ಪ)(54) ಮೃತ ದುರ್ದೈವಿ ವ್ಯಕ್ತಿಯಾಗಿದ್ದಾನೆ .
ಕೆಲಸದ ನಿಮಿತ್ತ ರೈತರು ಬೆಳೆದ ಈರುಳ್ಳಿಯನ್ನು ಖರೀದಿಗೆ ಕೊಡಿಸುವ ಸಲುವಾಗಿಹೋಗಿದ್ದ ಅವರು ಮಂಗಳವಾರ ಮಧ್ಯರಾತ್ರಿ 3 ಗಂಟೆ ಸಮಯದಲ್ಲಿ ಡಾಬಾ ಒಂದರಲ್ಲಿ ಊಟ ಕೇಳಲು ರಸ್ತೆ ದಾಟುತ್ತಿದ್ದಾಗ ಬೀದರ್ ಕಡೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ
ಮೃತನ ಮಗ ಅಖಿಲೇಶ್ ದೂರಿನ ಅನ್ವಯ ಕಾನಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..
ವರದಿ:- ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030