ತತ್ವಪದ ಗಾಯಕರಾದ ಶ್ರೀ ಆರ್. ಬಿ. ಗುರು ಶಂಕರಪ್ಪ ಸ್ವಾಮಿಗೆ ಪ್ರಶಸ್ತಿ ಸನ್ಮಾನ
ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ, ರಾಮಸಾಗರ ಹಟ್ಟಿ ಗ್ರಾಮದ ಗುರು ಶಂಕರಪ್ಪ ಅವರು ತತ್ವಪದ ಭಜನಾ ಕ್ಷೇತ್ರದಲ್ಲಿ ಮೇರು ಕಲಾವಿದರಾಗಿದ್ದು ಈಗಾಗಲೇ ಹಂಪಿ ಉತ್ಸವ ಸೇರಿ ನಾನ ಕಾರ್ಯಕ್ರಮಗಳಲ್ಲಿ ತಮ್ಮ ಕಲೆಯನ್ನು ಇದೀಗ ರಾಷ್ಟ್ರ ರಾಜಧಾನಿಯಲ್ಲೂ ತಮ್ಮ ಕಲೆ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ ಭಜನಾ ಕಲಾವಿದ ಗುರು ಶಂಕರಪ್ಪ ಅವರಿಗೆ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿಎಂ ನಾಗರಾಜ ಅವರು ಸನ್ಮಾನಿಸಿ ಅಭಿನಂದನೆ ಪತ್ರ ನೀಡಿದ್ದಾರೆ ಮತ್ತು ಎಸ್ ಎಸ್ ಪಾಟೀಲರ ಸಾರಥ್ಯದಲ್ಲಿ ಧಾರವಾಡ ರಂಗಾಯಣದ ಸಭಾಭವನದಲ್ಲಿ ನಡೆದ ವಿಶ್ವ ದರ್ಶನ ದಿನಪತ್ರಿಕೆ ಎರಡನೇ ಸಮ್ಮೇಳನದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅಖಿಲ ಕರ್ನಾಟಕ ಕೊರಚ ಮಹಾಸಂಘ ಬೆಂಗಳೂರು ನುಲಿಯ ಚಂದ್ರಯ್ಯನ ನೂತನ ಶಿಲಾಮೂರ್ತಿ ಘಟಕ ಯರ್ರ ಲಿಂಗನಹಳ್ಳಿ ಕೊರಚರಹಟ್ಟಿ 12ನೇ ಶತಮಾನದ ಕಾಯಕಯೋಗಿ ವಚನಕಾರ ಶ್ರೀ ಶ್ರೀ ಶಿವಶರಣ ನುಲಿಯ ಚಂದ್ರಯ್ಯನವರ ನೂತನ ಗೋಪುರ ಮತ್ತು ಶಿಲಾಮೂರ್ತಿ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಕಾಯಕಯೋಗಿಗಳು ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖ ಮಠ ಸಿದ್ದನಕೋಟೆ, ಶ್ರೀ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳು ಚಿಕ್ಕುಂತಿ ಮಠ ಇವರು ರಾಮಸಾಗರ ಹಟ್ಟಿಯ ಭಜನ ಕಲಾವಿದರು ತತ್ವಪದ ಗಾಯಕರಾದ ಶ್ರೀ ಆರ್ ಬಿ ಗುರು ಶಂಕರಪ್ಪ ಸ್ವಾಮಿಗೆ ಪ್ರಶಸ್ತಿ ನೀಡಿ ಸನ್ಮಾನ ಮಾಡಿದರು…
ವರದಿ. ಅನಿಲ್ ಕುಮಾರ್, ಹುಲಿಕುಂಟೆ, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030