ಗಣೇಶನಿಗೆ ಪೂಜೆ ಸಲ್ಲಿಸಿ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಲು ತಿಳಿಸಿದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ನರಸಿಂಹಗಿರಿ ಗ್ರಾಮದಲ್ಲಿ ಶ್ರೀಮತಿ ದೊಡ್ಡಮನೆ ಬೋರಮ್ಮ ತಮ್ಮಪ್ಪ ಪ್ರೌಢ ಶಾಲೆಗೆ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್.ಟಿ. ಅವರು ದಿ; 07-09-24 ರಂದು ಶ್ರೀ ಗಣೇಶನ ದರ್ಶನ ಪಡೆದು ಶಾಲಾ ಮಕ್ಕಳೊಂದಿಗೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರು. ನನ್ನ ತಂದೆಯವರು ಹಾಗೂ ಮಾಜಿ ಶಾಸಕರಾದ ದಿ. ಎನ್. ಟಿ. ಬೊಮ್ಮಣ್ಣನವರು ಗ್ರಾಮೀಣ ಭಾಗದ ಮಕ್ಕಳಿಗೆ ಶಾಲೆಗಳನ್ನು ತೆರೆದು ಅಕ್ಷರ ಬೀಜವನ್ನು ಬಿತ್ತಿದ ಶಿಕ್ಷಣ ಪ್ರೇಮಿ. ನಮ್ಮ ತಂದೆಯವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯಲು ನಾವು ಎಲ್ಲರೂ ಶ್ರಮವಹಿಸಿ ಈ ಭಾಗದಲ್ಲಿ ಶಿಕ್ಷಣಕ್ಕೆ ಒತ್ತು ಕೊಟ್ಟಾಗ ಮಾತ್ರ ಅವರ ಭಾವನೆಗಳನ್ನು ನಾವು ಗೌರವಸಿದಂತೆ ಆಗುತ್ತದೆ ಎಂದೂ ಹೇಳಿದರು. ಶಾಲೆಯ ಅಭಿವೃದ್ಧಿಗೆ ಒತ್ತು ಕೊಡುವುದಾಗಿ ತಿಳಿಸಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಶಿಕ್ಷಕರು ಗುಣಮಟ್ಟದ ಶಿಕ್ಷಣಕ್ಕೆ ಮತ್ತು ಶಿಸ್ತುಗೆ ಆಧ್ಯತೆ ನೀಡಬೇಕು ಎಂದೂ ಹೇಳಿದರು.ಹಾಗೆಯೇ ಶಿಕ್ಷಕರ ಮತ್ತು ಮಕ್ಕಳ ಯೋಗ ಕ್ಷೇಮ ವಿಚಾರಿಸಿ ಶಾಲೆಯ ಕುಂದುಕೊರತೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಬಸೇಟಪ್ಪ , ಸಹ ಶಿಕ್ಷಕರು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು…
ವರದಿ. ಅನಿಲ್ ಕುಮಾರ್, ಹುಲಿಕುಂಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030