ಸೂಲದಹಳ್ಳಿ ಗ್ರಾಮದಲ್ಲಿ ಪರಸ್ಪರ ಕೊಂಬಿನಿಂದ ಇರಿದುಕೊಂಡು ಎತ್ತು,ಆಕಳು ಸಾವು…!!!

Listen to this article

ಸೂಲದಹಳ್ಳಿ ಗ್ರಾಮದಲ್ಲಿ ಪರಸ್ಪರ ಕೊಂಬಿನಿಂದ ಇರಿದುಕೊಂಡು ಎತ್ತು,ಆಕಳು ಸಾವು…
ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ, ಖಾನಹೊಸಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಸೂಲದಹಳ್ಳಿ ಗ್ರಾಮದ ಬಡ ಓಬಯ್ಯ ತಂದೆ ಲೇಟ್ ಬಣವಿಕಲ್ಲು ಓಬಯ್ಯ ಎಂಬ ರೈತನ ಸುಮಾರು ಒಂದು ಲಕ್ಷ ರೂ ಬೆಲೆಬಾಳುವ ಒಂದು ಎತ್ತು ಒಂದು ಆಕಳು ಸಾವನ್ನಪ್ಪಿದ್ದು ರೈತನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ ತಡರಾತ್ರಿ ಎಂದಿನಂತೆ ಗುಡಿಸಲಿನಲ್ಲಿ ಎತ್ತು ಮತ್ತು ಆಕಳನ್ನು ಕಟ್ಟಿ ಹಾಕಿ ಮೇವು ಹಾಕಲಾಗಿತ್ತು ರಾತ್ರಿ ಒಂದು ಎರಡು ಗಂಟೆಯ ಸುಮಾರಿಗೆ ಪರಸ್ಪರ ಒಂದಕ್ಕೊಂದು ಕೊಂಬಿನಿಂದ ಇರಿದುಕೊಂಡು ಕೊಂಬು ಕುತ್ತಿಗೆಯ ಹಗ್ಗಗಳಲ್ಲಿ ಸಿಕ್ಕಿ ಹಾಕಿಕೊಂಡು ಹಗ್ಗ ಬಿಗಿಯಾದ ಪರಿಣಾಮ ರೈತನದ ಬಡ ಓಬಯ್ಯನ ಒಂದು ಎತ್ತು ಒಂದು ಆಕಳು ಸಾವನ್ನಪ್ಪಿವೆ, ಬೆಳಿಗ್ಗೆ ಎದ್ದು ನೋಡಿದ ರೈತ ತಕ್ಷಣ ಪಶು ಆಸ್ಪತ್ರೆಯ ವೈದ್ಯರನ್ನು ಕರೆದುಕೊಂಡು ಬಂದು ತೋರಿಸಿದ್ದಾರೆ ಆಗ ಆಕಳು, ಎತ್ತು ಮೃತಪಟ್ಟಿರುವುದು ದೃಢಪಟ್ಟಿದ್ದು ರೈತನ ಕುಟುಂಬಕ್ಕೆ ಸಾಂತ್ವನ ಹೇಳಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಎಂದು ಗ್ರಾಮದ ಹರಿಜನ ರಾಮಾಂಜನಿ, ಭರಮೇಶ, ವೆಂಕಟೇಶ್, ಯಜಮಾನ ಸಿದ್ದಪ್ಪ, ಬಸವರಾಜ ವಕೀಲರು, ವೈ ನಾಗರಾಜ, ಭರತ್ ಕುಮಾರ್ ರೈತನಾದ ಬಡ ಓಬಯ್ಯನಿಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು..

ವರದಿ:- ಅನಿಲ್ ಕುಮಾರ್ ಹುಲಿಕುಂಟೆ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend